Product image 1
Product image 2
HomeStore

ಋತುವಾಗುವುದ ಮರೆಮಾಚುವಂತಿಲ್ಲ

ಋತುವಾಗುವುದ ಮರೆಮಾಚುವಂತಿಲ್ಲ

ಈ ಸಂಕಲನದಲ್ಲಿನ ಕವಿತೆಗಳು ಋತು ಚಕ್ರದಂತೆ ಚಲಿಸುವ ಬದುಕಿನ ವಿವಿಧ ಸ್ಥಿತಿಗಳನ್ನು ಪ್ರತಿಬಿಂಬಿಸುತ್ತವೆ. 'ಋತು' ಎಂದರೆ ಕೇವಲ ಪ್ರಕೃತಿಯ ಪರಿವರ್ತನೆ ಅಲ್ಲ! ಅದು ಮನಸ್ಸಿನ ಸ್ಥಿತಿ ಅಥವಾ ತಿರುಗು. ಇಲ್ಲಿನ ಕವಿತೆಗಳಲ್ಲಿ ಋತುಗಳು ಬದಲಾಗುತ್ತವೆ. ಆದರೆ ಅವು ತಂದ ಪ್ರೀತಿ, ನೋವು, ಹತಾಶೆ, ನಿರೀಕ್ಷೆಗಳನ್ನು ಮರೆಯಲಾಗುವುದಿಲ್ಲ ಹಾಗೂ ಮರೆಮಾಚುವಂತೆಯೂ ಇಲ್ಲ.

ಕೊಲ್ಲಲು ಖಡ್ಗವೇ ಅಂತೇನಿಲ್ಲ, ಗಡಿಯಾರದ ಮುಳ್ಳುಗಳಿವೆ' ಎಂಬ ರೂಪಕದ ಮೂಲಕ ಕವಿ ಹಿಂಸೆಯ ಸ್ವರೂಪವನ್ನು ಮರು ಪರಿಭಾಷಿಸುತ್ತಾನೆ. ಇಲ್ಲಿ ಕೊಲೆ ಕ್ಷಣಿಕ ಕ್ರಿಯೆಯಲ್ಲ; ಅದು ಕಾಲದ ನಿಧಾನ, ನಿರಂತರ ಹಿಂಸೆಯಾಗಿದೆ. ಗಡಿಯಾರದ ಮುಳ್ಳುಗಳು ಬದುಕನ್ನು ತುಂಡರಿಸುವ ಅಶ್ರಾವ್ಯ ಆದರೆ ನಿರ್ದಯ ಸಾಧನಗಳಾಗಿ ರೂಪುಗೊಳ್ಳುತ್ತವೆ. ಒಂದು ವಿಷಾದವಿರಲಿ' ಎಂಬುದು ನಿರಂತರ ನೋವಿನ ಸೂಚನೆಯನ್ನು ತಿಳಿಸುತ್ತದೆ. ಕಾಲ, ಬದುಕು ಮತ್ತು ಮರಣದ ನಡುವಿನ ಕ್ರೂರ ಸಂಬಂಧವನ್ನು ಸರಳವಾಗಿ ಹಿಡಿದಿಡುವ ಶಕ್ತಿಯುತವಾದ ಪ್ರಯತ್ನವಾಗಿ ಈ ಮೇಲಿನ ಸಾಲುಗಳು ಕಂಡುಬರುತ್ತವೆ. ಇಲ್ಲಿ 'ನಕ್ಷತ್ರ' ಪ್ರಕಾಶದ ಸಂಕೇತವಲ್ಲ. ಅದು ಮಾಧ್ಯಮದ ಹೊಳಪಿನಲ್ಲಿ ಹುಟ್ಟಿ ಮನಸ್ಸಿನಲ್ಲಿ ಉಳಿಯದೇ ಮಾಯವಾಗುವ ತಾತ್ಕಾಲಿಕ ಗುರುತಿನಿಂದ ಹಿಡಿದು ಸನ್ಯಾಸಿ ನಕ್ಷತ್ರ, ಮುಖವಾಡದ ನಕ್ಷತ್ರ ಹೀಗೆ ಆಧುನಿಕ ಅಸ್ತಿತ್ವದ ಮೂಲಕ ನಿರ್ಮಿತ ಕೃತಕ ಪ್ರಕಾಶವನ್ನು ಸೂಚಿಸುತ್ತದೆ. ಅದೇ ರೀತಿ ಜೀತ ನಕ್ಷತ್ರ, ಆತ್ಮಹತ್ಯೆ ರೈತನ ನಕ್ಷತ್ರ ಮುಂತಾದ ಅತ್ಯಂತ ಕಠಿಣ ಮತ್ತು ಆಘಾತಕಾರಿ, ಸಾಮಾಜಿಕ ಕ್ರೂರತೆಗೆ ಬಲಿಯಾದ ನಕ್ಷತ್ರವನ್ನು ಮರೆಮಾಚುವಂತಿಲ್ಲ.

-ಡಾ. ಶೋಭಾ ನಾಯಕ 

$1.41
ಋತುವಾಗುವುದ ಮರೆಮಾಚುವಂತಿಲ್ಲ
$1.41

Product Information

Shipping & Returns

Description

ಈ ಸಂಕಲನದಲ್ಲಿನ ಕವಿತೆಗಳು ಋತು ಚಕ್ರದಂತೆ ಚಲಿಸುವ ಬದುಕಿನ ವಿವಿಧ ಸ್ಥಿತಿಗಳನ್ನು ಪ್ರತಿಬಿಂಬಿಸುತ್ತವೆ. 'ಋತು' ಎಂದರೆ ಕೇವಲ ಪ್ರಕೃತಿಯ ಪರಿವರ್ತನೆ ಅಲ್ಲ! ಅದು ಮನಸ್ಸಿನ ಸ್ಥಿತಿ ಅಥವಾ ತಿರುಗು. ಇಲ್ಲಿನ ಕವಿತೆಗಳಲ್ಲಿ ಋತುಗಳು ಬದಲಾಗುತ್ತವೆ. ಆದರೆ ಅವು ತಂದ ಪ್ರೀತಿ, ನೋವು, ಹತಾಶೆ, ನಿರೀಕ್ಷೆಗಳನ್ನು ಮರೆಯಲಾಗುವುದಿಲ್ಲ ಹಾಗೂ ಮರೆಮಾಚುವಂತೆಯೂ ಇಲ್ಲ.

ಕೊಲ್ಲಲು ಖಡ್ಗವೇ ಅಂತೇನಿಲ್ಲ, ಗಡಿಯಾರದ ಮುಳ್ಳುಗಳಿವೆ' ಎಂಬ ರೂಪಕದ ಮೂಲಕ ಕವಿ ಹಿಂಸೆಯ ಸ್ವರೂಪವನ್ನು ಮರು ಪರಿಭಾಷಿಸುತ್ತಾನೆ. ಇಲ್ಲಿ ಕೊಲೆ ಕ್ಷಣಿಕ ಕ್ರಿಯೆಯಲ್ಲ; ಅದು ಕಾಲದ ನಿಧಾನ, ನಿರಂತರ ಹಿಂಸೆಯಾಗಿದೆ. ಗಡಿಯಾರದ ಮುಳ್ಳುಗಳು ಬದುಕನ್ನು ತುಂಡರಿಸುವ ಅಶ್ರಾವ್ಯ ಆದರೆ ನಿರ್ದಯ ಸಾಧನಗಳಾಗಿ ರೂಪುಗೊಳ್ಳುತ್ತವೆ. ಒಂದು ವಿಷಾದವಿರಲಿ' ಎಂಬುದು ನಿರಂತರ ನೋವಿನ ಸೂಚನೆಯನ್ನು ತಿಳಿಸುತ್ತದೆ. ಕಾಲ, ಬದುಕು ಮತ್ತು ಮರಣದ ನಡುವಿನ ಕ್ರೂರ ಸಂಬಂಧವನ್ನು ಸರಳವಾಗಿ ಹಿಡಿದಿಡುವ ಶಕ್ತಿಯುತವಾದ ಪ್ರಯತ್ನವಾಗಿ ಈ ಮೇಲಿನ ಸಾಲುಗಳು ಕಂಡುಬರುತ್ತವೆ. ಇಲ್ಲಿ 'ನಕ್ಷತ್ರ' ಪ್ರಕಾಶದ ಸಂಕೇತವಲ್ಲ. ಅದು ಮಾಧ್ಯಮದ ಹೊಳಪಿನಲ್ಲಿ ಹುಟ್ಟಿ ಮನಸ್ಸಿನಲ್ಲಿ ಉಳಿಯದೇ ಮಾಯವಾಗುವ ತಾತ್ಕಾಲಿಕ ಗುರುತಿನಿಂದ ಹಿಡಿದು ಸನ್ಯಾಸಿ ನಕ್ಷತ್ರ, ಮುಖವಾಡದ ನಕ್ಷತ್ರ ಹೀಗೆ ಆಧುನಿಕ ಅಸ್ತಿತ್ವದ ಮೂಲಕ ನಿರ್ಮಿತ ಕೃತಕ ಪ್ರಕಾಶವನ್ನು ಸೂಚಿಸುತ್ತದೆ. ಅದೇ ರೀತಿ ಜೀತ ನಕ್ಷತ್ರ, ಆತ್ಮಹತ್ಯೆ ರೈತನ ನಕ್ಷತ್ರ ಮುಂತಾದ ಅತ್ಯಂತ ಕಠಿಣ ಮತ್ತು ಆಘಾತಕಾರಿ, ಸಾಮಾಜಿಕ ಕ್ರೂರತೆಗೆ ಬಲಿಯಾದ ನಕ್ಷತ್ರವನ್ನು ಮರೆಮಾಚುವಂತಿಲ್ಲ.

-ಡಾ. ಶೋಭಾ ನಾಯಕ 

ಋತುವಾಗುವುದ ಮರೆಮಾಚುವಂತಿಲ್ಲ | Harivu Books