Product image 1
HomeStore

ಕಾರಂತಜ್ಜನಿಗೊಂದು ಪತ್ರ

ಕಾರಂತಜ್ಜನಿಗೊಂದು ಪತ್ರ

ಆಧುನಿಕತೆಯೊಡನೆಯ ಸೆಣಸಾಟವು ಎಲ್ಲ ಕಾಲದ ಲೇಖಕರು ಎದುರಿಸಿದ ಸವಾಲಾಗಿದೆ. ಬಾಹ್ಯಲೋಕದ ಬದಲಾವಣೆ ತಕ್ಷಣ ಕಣ್ಣಿಗೆ ಬೀಳುತ್ತದೆ. ಆದರೆ ಮನುಷ್ಯ ಸಂಬಂಧಗಳ ಆಂತರಿಕ ಸ್ವರೂಪ ಮತ್ತು ಮೌಲ್ಯಗಳ ಪಲ್ಲಟ ಅಷ್ಟು ಸುಲಭಗ್ರಾಹ್ಯವಲ್ಲ. ಮತ್ತು ಇದು ಬಹಳ ವೇದನಾಭರಿತವಾದದ್ದು. ಸಚ್ಚಿದಾನಂದ ಹೆಗಡೆಯವರ ಕತೆಗಳು ಈ ರೂಪಾಂತರವನ್ನು ಬಗೆಬಗೆಯಲ್ಲಿ ಎದುರಿಸಲು, ಅರ್ಥೈಸಲು ಮಾಡಿದ ಪ್ರಾಮಾಣಿಕ ಪ್ರಯತ್ನಗಳಾಗಿವೆ. ತಮ್ಮ ಮೊದಲ ಸಂಕಲನ ದಲ್ಲಿಯೇ ಅವರು ಈವತ್ತಿನ ಮಹತ್ವದ ಬಿಕ್ಕಟ್ಟುಗಳನ್ನು ಎದುರಿಸುವ ಧೈರ್ಯವನ್ನೂ, ಸಂಕಲ್ಪವನ್ನೂ ತೋರಿಸಿದ್ದಾರೆ, ಬಹುಮುಖ್ಯವಾದ ಸಂಗತಿಯೆಂದರೆ, ಬದಲಾವಣೆಯ ಬಗ್ಗೆ ಹಳಹಳಿಕೆಯಿಲ್ಲದ ದೃಷ್ಟಿಕೋನ. ಇದರಿಂದಾಗಿ ಅನುಭವಗಳ ಆರೋಗ್ಯಪೂರ್ಣ ಮರುಸೃಷ್ಟಿ ಸಾಧ್ಯವಾಗಿದೆ.

ವಸ್ತುವಿನ ವೈವಿಧ್ಯತೆ, ಕಥನದ ಕುಶಲತೆ, ನಿರ್ಣಾಯಕ ನೋಟ ಹೇರಲು ಅವಸರ ಪಡದ ಆರೋಗ್ಯಪೂರ್ಣ ಜೀವನದೃಷ್ಟಿಯುಳ್ಳ ಈ ಕತೆಗಳು ಓದುಗರಿಗೆ ಮುದವನ್ನೂ, ವಿಚಾರ ಪ್ರಚೋದನೆಯನ್ನೂ ಕೊಡುವಂಥವು. ಈ ಸಂಕಲನದ ಮೂಲಕ ಕನ್ನಡ ಕಥಾಕ್ಷೇತ್ರವನ್ನು ಪ್ರವೇಶಿಸುತ್ತಿರುವ ಸಚ್ಚಿದಾನಂದರನ್ನು ಓದುಗರು ಹೃತ್ತೂರ್ವಕ ಸ್ವಾಗತಿಸುತ್ತಾರೆನ್ನುವುದರಲ್ಲಿ ಸಂಶಯವಿಲ್ಲ.

-ವಿವೇಕ ಶಾನಭಾಗ
$0.36

Original: $1.19

-70%
ಕಾರಂತಜ್ಜನಿಗೊಂದು ಪತ್ರ

$1.19

$0.36

Product Information

Shipping & Returns

Description

ಆಧುನಿಕತೆಯೊಡನೆಯ ಸೆಣಸಾಟವು ಎಲ್ಲ ಕಾಲದ ಲೇಖಕರು ಎದುರಿಸಿದ ಸವಾಲಾಗಿದೆ. ಬಾಹ್ಯಲೋಕದ ಬದಲಾವಣೆ ತಕ್ಷಣ ಕಣ್ಣಿಗೆ ಬೀಳುತ್ತದೆ. ಆದರೆ ಮನುಷ್ಯ ಸಂಬಂಧಗಳ ಆಂತರಿಕ ಸ್ವರೂಪ ಮತ್ತು ಮೌಲ್ಯಗಳ ಪಲ್ಲಟ ಅಷ್ಟು ಸುಲಭಗ್ರಾಹ್ಯವಲ್ಲ. ಮತ್ತು ಇದು ಬಹಳ ವೇದನಾಭರಿತವಾದದ್ದು. ಸಚ್ಚಿದಾನಂದ ಹೆಗಡೆಯವರ ಕತೆಗಳು ಈ ರೂಪಾಂತರವನ್ನು ಬಗೆಬಗೆಯಲ್ಲಿ ಎದುರಿಸಲು, ಅರ್ಥೈಸಲು ಮಾಡಿದ ಪ್ರಾಮಾಣಿಕ ಪ್ರಯತ್ನಗಳಾಗಿವೆ. ತಮ್ಮ ಮೊದಲ ಸಂಕಲನ ದಲ್ಲಿಯೇ ಅವರು ಈವತ್ತಿನ ಮಹತ್ವದ ಬಿಕ್ಕಟ್ಟುಗಳನ್ನು ಎದುರಿಸುವ ಧೈರ್ಯವನ್ನೂ, ಸಂಕಲ್ಪವನ್ನೂ ತೋರಿಸಿದ್ದಾರೆ, ಬಹುಮುಖ್ಯವಾದ ಸಂಗತಿಯೆಂದರೆ, ಬದಲಾವಣೆಯ ಬಗ್ಗೆ ಹಳಹಳಿಕೆಯಿಲ್ಲದ ದೃಷ್ಟಿಕೋನ. ಇದರಿಂದಾಗಿ ಅನುಭವಗಳ ಆರೋಗ್ಯಪೂರ್ಣ ಮರುಸೃಷ್ಟಿ ಸಾಧ್ಯವಾಗಿದೆ.

ವಸ್ತುವಿನ ವೈವಿಧ್ಯತೆ, ಕಥನದ ಕುಶಲತೆ, ನಿರ್ಣಾಯಕ ನೋಟ ಹೇರಲು ಅವಸರ ಪಡದ ಆರೋಗ್ಯಪೂರ್ಣ ಜೀವನದೃಷ್ಟಿಯುಳ್ಳ ಈ ಕತೆಗಳು ಓದುಗರಿಗೆ ಮುದವನ್ನೂ, ವಿಚಾರ ಪ್ರಚೋದನೆಯನ್ನೂ ಕೊಡುವಂಥವು. ಈ ಸಂಕಲನದ ಮೂಲಕ ಕನ್ನಡ ಕಥಾಕ್ಷೇತ್ರವನ್ನು ಪ್ರವೇಶಿಸುತ್ತಿರುವ ಸಚ್ಚಿದಾನಂದರನ್ನು ಓದುಗರು ಹೃತ್ತೂರ್ವಕ ಸ್ವಾಗತಿಸುತ್ತಾರೆನ್ನುವುದರಲ್ಲಿ ಸಂಶಯವಿಲ್ಲ.

-ವಿವೇಕ ಶಾನಭಾಗ
ಕಾರಂತಜ್ಜನಿಗೊಂದು ಪತ್ರ | Harivu Books