

ಭಾರತ ಏಕೀಕರಣ ಶಿಲ್ಪಿ
ರಾಜನ್ ದೇಶಪಾಂಡೆ ಅವರ ಈ ಲೇಖನಗಳು ಯಾರಿಗೂ ಉಪದೇಶ ಕೊಡುವ ಧಾಟಿಯಲ್ಲಿ ಬರೆದುವುಗಳಲ್ಲ; ಆದರೆ ಯಾರನ್ನೂ ನೋಯಿಸಲಾರದೆ, ಆಪ್ತ ಧಾಟಿಯಲ್ಲಿ ಅಕ್ಕರೆಯಿಂದ ಹೇಳುವ ತಾಯಿಯಂತೆ, ತಿಳಿಸುವ ಗುರುವಿನಂತೆ, ಬೋಧಿಸುವ ಸಂತನಂತೆ ನಿವೇದಿಸುವ ಪ್ರಾಮಾಣಿಕ ಬರೆಹಗಳಾಗಿವೆ. ಅನೇಕ ಲೇಖನಗಳಲ್ಲಿ ನೇರ ಹೆಸರು ಸಹ ಉಲ್ಲೇಖಿಸುವುದಿಲ್ಲ. ರಾಜನ್ ದೇಶಪಾಂಡೆ ತೆರೆದ ಹೃದಯದಿಂದ ತಮ್ಮನ್ನು ಬಿಚ್ಚಿಡುತ್ತಿದ್ದಾರೆ. ಆದ್ದರಿಂದಲೇ ಈ ಲೇಖನಗಳಲ್ಲಿ ಮುಗ್ಧತೆಯಿದೆ, ಅಂತಃಕರಣವಿದೆ, ಎಚ್ಚರಿಕೆಯ ದನಿಯಿದೆ; ಕಳೆದುದರ ಬಗ್ಗೆ ಕಾಳಜಿಯಿದೆ, ಭವಿಷ್ಯದ ಬಗ್ಗೆ ಕಳಕಳಿಯಿದೆ, ಚಿಂತನೆಯಿದೆ. ಇಲ್ಲಿ ವರ್ಣಿತವಾಗಿರುವ ರಾಜನ್ ಅವರ ನೂರಾರು ಕಥಾರೂಪದ ಅನುಭವಗಳು ತುಂಬ ರೋಚಕವಾಗಿವೆ. ಅವುಗಳನ್ನು ಓದುವ ಅಥವಾ ಕೇಳಿಸಿಕೊಳ್ಳುವ ವ್ಯಕ್ತಿ ಖಂಡಿತವಾಗಿಯೂ ಜೀವನ ಪಯಣವನ್ನು ಆನಂದಿಸಲು ಕಲಿಯುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಅವರ ವೃತ್ತಿಧರ್ಮಕ್ಕೂ ಈಗಿನ ಅಕ್ಷರಧರ್ಮಕ್ಕೂ ಪ್ರಾಮಾಣಿಕ ಮನೋಧರ್ಮಕ್ಕೂ ಸಾಮಾಜಿಕ ಸೇವಾಧರ್ಮಕ್ಕೂ ಹಾರ್ದಿಕ ಶುಭಾಶಯಗಳು.
- ಸಿದ್ಧಲಿಂಗ ಪಟ್ಟಣಶೆಟ್ಟಿ
Original: $2.05
-70%$2.05
$0.61Product Information
Product Information
Shipping & Returns
Shipping & Returns
Description
ರಾಜನ್ ದೇಶಪಾಂಡೆ ಅವರ ಈ ಲೇಖನಗಳು ಯಾರಿಗೂ ಉಪದೇಶ ಕೊಡುವ ಧಾಟಿಯಲ್ಲಿ ಬರೆದುವುಗಳಲ್ಲ; ಆದರೆ ಯಾರನ್ನೂ ನೋಯಿಸಲಾರದೆ, ಆಪ್ತ ಧಾಟಿಯಲ್ಲಿ ಅಕ್ಕರೆಯಿಂದ ಹೇಳುವ ತಾಯಿಯಂತೆ, ತಿಳಿಸುವ ಗುರುವಿನಂತೆ, ಬೋಧಿಸುವ ಸಂತನಂತೆ ನಿವೇದಿಸುವ ಪ್ರಾಮಾಣಿಕ ಬರೆಹಗಳಾಗಿವೆ. ಅನೇಕ ಲೇಖನಗಳಲ್ಲಿ ನೇರ ಹೆಸರು ಸಹ ಉಲ್ಲೇಖಿಸುವುದಿಲ್ಲ. ರಾಜನ್ ದೇಶಪಾಂಡೆ ತೆರೆದ ಹೃದಯದಿಂದ ತಮ್ಮನ್ನು ಬಿಚ್ಚಿಡುತ್ತಿದ್ದಾರೆ. ಆದ್ದರಿಂದಲೇ ಈ ಲೇಖನಗಳಲ್ಲಿ ಮುಗ್ಧತೆಯಿದೆ, ಅಂತಃಕರಣವಿದೆ, ಎಚ್ಚರಿಕೆಯ ದನಿಯಿದೆ; ಕಳೆದುದರ ಬಗ್ಗೆ ಕಾಳಜಿಯಿದೆ, ಭವಿಷ್ಯದ ಬಗ್ಗೆ ಕಳಕಳಿಯಿದೆ, ಚಿಂತನೆಯಿದೆ. ಇಲ್ಲಿ ವರ್ಣಿತವಾಗಿರುವ ರಾಜನ್ ಅವರ ನೂರಾರು ಕಥಾರೂಪದ ಅನುಭವಗಳು ತುಂಬ ರೋಚಕವಾಗಿವೆ. ಅವುಗಳನ್ನು ಓದುವ ಅಥವಾ ಕೇಳಿಸಿಕೊಳ್ಳುವ ವ್ಯಕ್ತಿ ಖಂಡಿತವಾಗಿಯೂ ಜೀವನ ಪಯಣವನ್ನು ಆನಂದಿಸಲು ಕಲಿಯುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಅವರ ವೃತ್ತಿಧರ್ಮಕ್ಕೂ ಈಗಿನ ಅಕ್ಷರಧರ್ಮಕ್ಕೂ ಪ್ರಾಮಾಣಿಕ ಮನೋಧರ್ಮಕ್ಕೂ ಸಾಮಾಜಿಕ ಸೇವಾಧರ್ಮಕ್ಕೂ ಹಾರ್ದಿಕ ಶುಭಾಶಯಗಳು.
- ಸಿದ್ಧಲಿಂಗ ಪಟ್ಟಣಶೆಟ್ಟಿ











